‘ಕಾರ್ಖಾನೆಗಳಿಗೆ ಬೀಗಮುದ್ರೆ ಘೋಷಿಸುವಾಗ ಕಾರ್ಮಿಕರನ್ನು ವಜಾಗೊಳಿಸಲು ಇದ್ದ ಮಿತಿಯನ್ನು 100 ರಿಂದ 300 ಕಾರ್ಮಿಕರಿಗೆ ಹೆಚ್ಚಿಸಲಾಗಿದೆ. ಇದರಿಂದ ಮಾರುಕಟ್ಟೆ ಕುಸಿತ ಹಾಗೂನಷ್ಟದ ನೆಪ ಹೇಳಿ ಕಾರ್ಖಾನೆ ಮುಚ್ಚಲು ಮುಕ್ತ ಅವಕಾಶ ದೊರೆಯಲಿದೆ. ಕೋವಿಡ್ ಪರಿಸ್ಥಿತಿಯ ದುರ್ಲಾಭ ಪಡೆದು ಕಾರ್ಮಿಕರನ್ನು ಬೀದಿಗೆ ತಳ್ಳಲು ಸರ್ಕಾರವೇ ಪರವಾನಗಿ ನೀಡಿದಂತೆ ಆಗಲಿದೆ’ ಎಂದಿದ್ದಾರೆ.