‘ಕಾಯ್ದಿರಿಸಿದ ಹಾಸಿಗೆಗಳು ಭರ್ತಿಯಾಗಿದ್ದರೂ ಹಣ ಪಾವತಿಸುವವರಿಗೆ ಬೇರೆ ವ್ಯವಸ್ಥೆ ಮಾಡಬೇಕು. ಪ್ರಯೋಗಾಲಯದ ವರದಿ ಬರುವ ತನಕ ದಾಖಲಿಸಿಕೊಳ್ಳುವುದಿಲ್ಲ ಎಂದೂ ವಾಪಸ್ ಕಳಹಿಸಬಾರದು. ಸೋಂಕು ದೃಢಪಟ್ಟಿರುವುದಕ್ಕೆ ಸಂಬಂಧಿಸಿದ ಸ್ಎಂಎಸ್ ಅಥವಾ ಆರೋಗ್ಯ ಸೇತು ಆ್ಯಪ್ನಲ್ಲಿನ ಮಾಹಿತಿ ಆಧರಿಸಿಯೂ ದಾಖಲು ಮಾಡಿಕೊಳ್ಳಬೇಕು ಎಂಬ ನಿರ್ದೇಶನವನ್ನು ಸರ್ಕಾರ ನೀಡಬೇಕು. ಸೋಂಕಿತರನ್ನು ಕರೆ ತರಲು ಅವರ ಮನೆಗೆ ಬಿಬಿಎಂಪಿ ಸಿಬ್ಬಂದಿ ಹೋಗುವಷ್ಟರಲ್ಲೇ ಆಸ್ಪತ್ರೆ ಹುಡುಕುವ ವ್ಯವಸ್ಥೆ ಆಗಬೇಕು’ ಎಂದು ಪೀಠ ತಿಳಿಸಿತು.