ಈ ವರದಿಯನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿರುವ ಎಚ್.ಡಿ ಕುಮಾರಸ್ವಾಮಿ, ‘ಕಾಲುಸಂಕ ದಾಟುತ್ತಿದ್ದ ವೇಳೆ ಶಾಲಾ ಬಾಲಕಿಯೊಬ್ಬಳು ತೊರೆಗೆ ಬಿದ್ದು ಮೃತಪಟ್ಟ ಸುದ್ದಿ ಅಂದು ನನ್ನ ಮನ ಕಲಕಿತ್ತು. ಮಲೆನಾಡು, ಕರಾವಳಿಯಲ್ಲಿ ಈ ಸಮಸ್ಯೆ ನಿವಾರಿಸಲು ಅಂದು ಮನಸು ಮಾಡಿ ಬಜೆಟ್ ನಲ್ಲಿ 'ಶಾಲಾ ಸಂಪರ್ಕ ಸೇತು' ಯೋಜನೆ ಘೋಷಿಸಿದೆ. ಅದು ಯಶಸ್ವಿಯಾಗಿದೆ. ವಿದ್ಯಾರ್ಥಿಗಳಿಗೆ ನೆರವಾಗಿದೆ. "ನಮ್ಮ ಕೆಲಸಗಳು ಮಾತನಾಡಬೇಕು. ಮಾತನಾಡುತ್ತಿವೆ" ಎಂದು ಟ್ವೀಟ್ ಮಾಡಿದ್ದಾರೆ.