ಬೆಂಗಳೂರು: ಕೋವಿಡ್ ಕಾರ್ಯಪಡೆಯಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅಸಮಾಧಾನಗೊಂಡಿದ್ದು, ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಳಲು ತೋಡಿಕೊಂಡರು ಎಂದು ಮೂಲಗಳು ತಿಳಿಸಿವೆ.
ಕಾರ್ಯಪಡೆ ಸಭೆಗಳಲ್ಲಿ ತಮ್ಮ ಮಾತುಗಳಿಗೆ ಅಧಿಕಾರಿಗಳೂ ಬೆಲೆ ನೀಡುತ್ತಿಲ್ಲ. ಎರಡನೇ ಬಾರಿ ಆರೋಗ್ಯ ಸಚಿವನಾಗಿ ಖಾತೆಯನ್ನು ನಿರ್ವಹಿಸುತ್ತಿರುವ ತಮ್ಮನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ ಎಂಬ ಬೇಗುದಿಯನ್ನು ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕಾರ್ಯಪಡೆ ಸಭೆಯಲ್ಲಿ ಬೇಸರಗೊಂಡು ಸಭೆಯಿಂದ ಅರ್ಧಕ್ಕೆ ಹೊರಹೋದರು ಎಂದು ಹೇಳಲಾಗಿದ್ದು, ಈ ಕುರಿತ ಪ್ರತಿಕ್ರಿಯೆಗೆ ಶ್ರೀರಾಮುಲು ಸಿಗಲಿಲ್ಲ.