ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ‘ಬ್ರಹ್ಮ’ ಹೆಸರಿನ 20 ವರ್ಷ ವಯಸ್ಸಿನ ಗಂಡು ಹುಲಿ ಮೃತಪಟ್ಟಿದೆ.
ಈ ಹುಲಿಯನ್ನು 2008 ರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ತೆರಾಲು ಗ್ರಾಮದಲ್ಲಿ ಸೆರೆಹಿಡಿದು ಮೃಗಾಲಯಕ್ಕೆ ತರಲಾಗಿತ್ತು. ಯೋಗಗುರು ಬಿ.ಕೆ.ಎಸ್ ಅಯ್ಯಂಗಾರ್ ಅವರು ಹುಲಿಯನ್ನು ಜೀವನಪರ್ಯಂತ ದತ್ತು ಸ್ವೀಕರಿಸಿದ್ದರು.
‘ಶುಕ್ರವಾರ ಮಧ್ಯಾಹ್ನ 3ರ ಸುಮಾರಿಗೆ ವಯೋಸಹಜ ಕಾರಣಗಳಿಂದ ಹುಲಿ ಮೃತಪಟ್ಟಿದೆ. ಮೃಗಾಲಯದಲ್ಲಿ ಈಗ 10 ಗಂಡು ಹಾಗೂ ಆರು ಹೆಣ್ಣು ಹುಲಿಗಳು ಇವೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.