‘ಆಯ್ದ ಕೆಲವರಿಗೇ ದೇವಸ್ಥಾನ ಪ್ರವೇಶ ಅನುಮತಿ ನೀಡಲು ನಿರ್ಧಾರ ಮಾಡಿದ್ದು ಯಾರು’ ಎಂದು ಪೀಠ ಮೌಖಿಕವಾಗಿ ಪ್ರಶ್ನಿಸಿತು. ‘ಪ್ರತಿ ಪ್ರಕರಣದ ಬಗ್ಗೆಯೂ ತನಿಖಾ ವರದಿಯನ್ನು ಸಲ್ಲಿಸಬೇಕು. ಅನುಮತಿ ನೀಡಿದವರು ಯಾರು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ವರದಿ ಒಳಗೊಂಡಿರಬೇಕು’ ಎಂದು ಪೀಠ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.