ಬೆಂಗಳೂರು: ರಾಜ್ಯದ ಜನರಿಗೆ ಗುರುವಾರ ಕೆಲವು ಪ್ರಮುಖ ವಿಷಯಗಳನ್ನು ಗಮನಕ್ಕೆ ತರಲಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯ ಅವರು ಟ್ವೀಟ್ ಮಾಡಿದ್ದಾರೆ.
‘ಗುರುವಾರ ಬೆಳಿಗ್ಗೆ 11 ಗಂಟೆಗೆ ಮಾಧ್ಯಮದ ಮೂಲಕ ಕೆಲವು ಪ್ರಮುಖ ವಿಚಾರಗಳನ್ನು ರಾಜ್ಯದ ಜನತೆಯ ಗಮನಕ್ಕೆ ತರಲಿದ್ದೇನೆ. ಈ ಪತ್ರಿಕಾ ಸಂವಾದ ಫೇಸ್ ಬುಕ್ ಹಾಗೂ ಟ್ವಿಟ್ಟರ್ನಲ್ಲಿ ನೇರಪ್ರಸಾರವಾಗಲಿದೆ,’ ಎಂದು ಅವರು ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರು ತಾವು ನಡೆಸುವ ಮಾಧ್ಯಮ ಸಂವಾದ, ಸುದ್ದಿಗೋಷ್ಠಿಗಳ ಕುರಿತು ಟ್ವಿಟರ್ನಲ್ಲಿ ಮೊದಲೇ ತಿಳಿಸಿರುವುದು ಅಪರೂಪ. ಹೀಗಾಗಿ ಅವರ ಇಂದಿನ ಸುದ್ದಿಗೋಷ್ಠಿ ಸಹಜವಾಗಿಯೇ ಗಮನ ಸೆಳೆದಿದೆ. ಕುತೂಹಲಕ್ಕೂ ಕಾರಣವಾಗಿದೆ.
ಕೋವಿಡ್–19 ವ್ಯಾಪಕವಾಗುತ್ತಿರುವ ಹೊತ್ತಿನಲ್ಲಿ ಅವರು ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಅಕ್ರಮವಾಗಿದೆ ಎಂದು ಸುದ್ದಿಗೋಷ್ಠಿಗಳ ಮೂಲಕ ಆರೋಪಿಸಿದ್ದರು.
ನಾಳೆ ಬೆಳಿಗ್ಗೆ 11 ಗಂಟೆಗೆ ಮಾಧ್ಯಮದ ಮೂಲಕ ಕೆಲವು ಪ್ರಮುಖ ವಿಚಾರಗಳನ್ನು ರಾಜ್ಯದ ಜನತೆಯ ಗಮನಕ್ಕೆ ತರಲಿದ್ದೇನೆ. ಈ ಪತ್ರಿಕಾ ಸಂವಾದ ಫೇಸ್ ಬುಕ್ ಹಾಗೂ ಟ್ವಿಟ್ಟರ್ನಲ್ಲಿ ನೇರಪ್ರಸಾರವಾಗಲಿದೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ. pic.twitter.com/CgZqMmVuoR