ಕೇರಳದ ವಯನಾಡ್ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಎಡಪಕ್ಷಗಳ ಎದುರು ಸ್ಪರ್ಧೆ ಮಾಡಿರುವುದು ಒಂದು ರೀತಿಯಲ್ಲಿ ನಿಮಗೆ ಮುಖಭಂಗವಾದಂತಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಯೆಚೂರಿ, ಇದು ದುರದೃಷ್ಟಕರ, ನಿಮ್ಮ ಅಜ್ಜಿ ಮತ್ತು ತಾಯಿ ಕರ್ನಾಟಕದಿಂದ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದಾರೆ. ನೀವು ಅಲ್ಲಿಂದ ಸ್ಪರ್ಧೆ ಮಾಡಿ ಎಂದು ರಾಹುಲ್ ಗಾಂಧಿಗೆ ಸಲಹೆ ಮಾಡಲಾಗಿತ್ತು ಎಂದುಹಿಂದೂಸ್ತಾನ್ ಟೈಮ್ಸ್ಗೆ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.