ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ದಿಬ್ಬಣವಾಯ್ತು ಮದುವೆ ಮೆರವಣಿಗೆ; ಟ್ರಕ್‌ ಹರಿದು 13 ಮಂದಿ ಸಾವು

Last Updated 19 ಫೆಬ್ರುವರಿ 2019, 2:15 IST
ಅಕ್ಷರ ಗಾತ್ರ

ಪ್ರತಾಪಗಡ: ರಾಜಸ್ಥಾನದ ಪ್ರತಾಪಗಡದಲ್ಲಿ ಟ್ರಕ್‌ ಹರಿದು 13 ಮಂದಿ ಸಾವಿಗೀಡಾಗಿದ್ದು,15 ಮಂದಿ ಗಾಯಗೊಂಡಿರುವ ದುರ್ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

ಜೈಪುರದಿಂದ 417 ಕಿ.ಮೀ. ದೂರದಲ್ಲಿರುವಅಂಬವಾಲಿ ಗ್ರಾಮದ ಸಮೀಪ ಪ್ರತಾಪಗಡ–ಜೈಪುರ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಹೆದ್ದಾರಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿರುವ ಜನರು ರಸ್ತೆ ಪಕ್ಕ ಮದುವೆ ಮೆರವಣಿಯಲ್ಲಿ ಸಾಗುತ್ತಿದ್ದರು. ’ಬಿಂದೋಳಿ’ ಎಂದು ಕರೆಯಲಾಗುವ ಮದುವೆ ಮೆರವಣಿಗೆ ನಡೆಯುತ್ತಿದ್ದ ಸಮಯದಲ್ಲಿ ಜನರ ಮೇಲೆ ಟ್ರಕ್ ಹರಿದಿದೆ.

ಅಪಘಾತ ಸಂಭವಿಸಿದ ಸ್ಥಳದಲ್ಲಿಯೇ 9 ಮಂದಿ ಮೃತಪಟ್ಟಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ. ಮದುವಣಗಿತ್ತಿ ಸೇರಿ 15 ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT