ಹೊಸದುರ್ಗ: ಯಾವುದೇ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ಪರ ಬೆಂಬಲಿಗರು ಪಕ್ಷದ ಚಿಹ್ನೆ ಇರುವ ಬಾವುಟ, ಟೋಪಿ, ರುಮಾಲು ಹಾಕಿಕೊಂಡು ಮತಯಾಚನೆ ಮಾಡುವುದು ಸಾಮಾನ್ಯ. ಆದರೆ ತಾಲ್ಲೂಕಿನ ಮತ್ತೋಡು ಗ್ರಾಮದಲ್ಲಿ ಯುವಕ ಅಗ್ನಿ ರಂಗನಾಥ್ ಎಂಬುವವರು ಹಿಂದಲೆಯಲ್ಲಿ ಕಮಲದಂತೆ ಕೇಶ ವಿನ್ಯಾಸ ಮಾಡಿಸಿ, ಪ್ರಚಾರದಲ್ಲಿ ತೊಡಗಿದ್ದಾರೆ.