ನವದೆಹಲಿ : ಸರ್ಕಾರವು ಆಹಾರ ಹಾಗೂ ಉದ್ಯೋಗ ನೀಡದಿದ್ದಲ್ಲಿ, ಭಿಕ್ಷಾಟನೆಯು ಅಪರಾಧ ಹೇಗಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ. ಭಿಕ್ಷಾಟನೆಯನ್ನು ನ್ಯಾಯಸಮ್ಮತಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನು ಹಂಗಾಮಿ ಮುಖ್ಯನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ನ್ಯಾಯಮೂರ್ತಿ ಸಿ. ಹರಿಶಂಕರ್ ಅವರಿದ್ದ ಪೀಠ ವಿಚಾರಣೆ ನಡೆಸಿತು.