‘ಸಂವಿಧಾನದ 10ನೇ ಅನುಚ್ಛೇದದ ಅಡಿಯಲ್ಲೇ ಈ ನಿಯಮ ರೂಪಿಸಲಾಗಿದೆ. ಸಭಾಧ್ಯಕ್ಷರು 2017,ಸೆಪ್ಟೆಂಬರ್ 18ರಿಂದಲೇ ಅನ್ವಯವಾಗುವಂತೆ ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿರುವುದರಿಂದ ತಕ್ಷಣದಿಂದಲೇ ಅವರು ಸದಸ್ಯತ್ವ ಕಳೆದುಕೊಂಡಿದ್ದಾರೆ’ ಎಂದು ತಮಿಳುನಾಡು ವಿಧಾನಸಭಾ ಕಾರ್ಯದರ್ಶಿ ಕೆ. ಭೂಪತಿ ಅವರು ಆ ವೇಳೆ ಹೇಳಿದ್ದರು.