ವಾರಣಾಸಿ: ಶ್ರಮಿಕ್ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವಲಸೆ ಕಾರ್ಮಿಕರು ಬುಧವಾರ ಬೆಳಿಗ್ಗೆ ಮುಂಬೈಯಿಂದ ವಾರಣಾಸಿಯ ಮಾಂಡುಡಿ ರೈಲು ನಿಲ್ದಾಣವನ್ನು ತಲುಪಿದಾಗ ಶವವಾಗಿ ಪತ್ತೆಯಾಗಿದ್ದಾರೆ.
ಇತರ ಪ್ರಯಾಣಿಕರು ರೈಲಿನಿಂದ ಇಳಿದು ಹೋದಾಗ ರೈಲಿನಲ್ಲಿ ಶವಗಳು ಇದ್ದದ್ದು ರೈಲ್ವೆ ಸಿಬ್ಬಂದಿ ಗಮನಕ್ಕೆ ಬಂದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರನ್ನು ಕರೆಸಲಾಗಿದ್ದು, ಶವಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೃತರಲ್ಲಿ ಒಬ್ಬಾತ ಅಂಕವಿಕಲನಾಗಿದ್ದ ದಶರಥ್ ಪ್ರಜಾಪತಿ (20) ಎಂದು ಗುರುತಿಸಲಾಗಿದ್ದು, ಆತ ಜಾನ್ಪುರದ ಬದ್ಲಾಪುರದಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಮೃತಪಟ್ಟ ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ.
ಜಿಆರ್ಪಿ ಡಿಎಸ್ಪಿ ಅಖಿಲೇಶ್ ರೈ ಮಾತನಾಡಿ, ಮೃತದೇಹವನ್ನು ಸ್ವೀಕರಿಸಲು ಪ್ರಜಾಪತಿ ಅವರ ಕುಟುಂಬವು ಆಗಮಿಸಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವಿಶೇಷ ರೈಲು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್ನಿಂದ ಪ್ರಯಾಣವನ್ನು ಆರಂಭಿಸಿತ್ತು.