25 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದ ಮಿನಿ ಬಸ್ನಲ್ಲಿ 52 ಮಂದಿ ಪ್ರಯಾಣಿಕರಿದ್ದರು. ಅವಘಡ ಸಂಭವಿಸಿದಮಾಹಿತಿ ಬಂದ ತಕ್ಷಣವೇ ಪೊಲೀಸ್, ಎಸ್ಡಿಆರ್ಎಫ್ ಹಾಗೂ ರೆಡ್ ಕ್ರಾಸ್ ಸಿಬ್ಬಂದಿಯೊಂದಿಗೆ ತೆರಳಿ ಕಾರ್ಯಾಚರಣೆ ನಡೆಸಲಾಯಿತು. ಸೇನಾಪಡೆ ಯೋಧರು ಸಹ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದರು. ಗಾಯಾಳುಗಳನ್ನು ಕಿಶ್ತ್ವಾರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.