ಹಾಲಿ 97 ಸಂಸತ್ ಸದಸ್ಯರಲ್ಲಿ 44 ಮಂದಿ ಮಾತ್ರ ಮತ್ತೆ ಕಣಕ್ಕಿಳಿಯುವ ಅವಕಾಶ ಪಡೆದಿದ್ದಾರೆ. ಜೆಡಿಎಸ್ ಅಧ್ಯಕ್ಷ ಎಚ್.ಡಿ.ದೇವೇಗೌಡ (ತುಮ
ಕೂರು), ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯಿಲಿ (ಚಿಕ್ಕಬಳ್ಳಾಪುರ), ನ್ಯಾಷನಲ್ ಕಾನ್ಫರೆನ್ಸ್ ಸ್ಥಾಪಕ ಫಾರೂಕ್ ಅಬ್ದುಲ್ಲಾ (ಶ್ರೀನಗರ), ಲೋಕಸಭೆ ಉಪಸಭಾಧ್ಯಕ್ಷ ತಂಬಿದೊರೈ (ತಮಿಳುನಾಡಿನ ಕರೂರು) ಇವರಲ್ಲಿ ಪ್ರಮುಖರು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್, ಮಾಜಿ ಬಾಲಿ
ವುಡ್ ನಟಿ, ಬಿಜೆಪಿಯ ಹೇಮಾಮಾಲಿನಿ, ಶೋಭಾ ಕರಂದ್ಲಾಜೆ, ಕಾಂಗ್ರೆಸ್ನ ತಾರೀಖ್ ಅನ್ವರ್, ಪಿ.ಎಂ.ಕೆ.ಯ ಅನ್ಬುಮಣಿ ರಾಮದಾಸ್ ಕಣದಲ್ಲಿರುವ ಇತರ ಪ್ರಮುಖ ಸಂಸದರು.