ಈಚೆಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಗೆದ್ದು, ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಇದು ಪಕ್ಷದ ಹುರುಪನ್ನು ಹೆಚ್ಚಿಸಿದೆ. ಮಹಾರಾಷ್ಟ್ರವೂ ಸೇರಿ ನಾಲ್ಕು ರಾಜ್ಯಗಳಿಂದ ಪಕ್ಷದ 50 ಸಂಸದರಾದರೂ ಆರಿಸಿ ಬರಬೇಕು. ಹೀಗಾಗಿ ಪಕ್ಷವು ತಂತ್ರ ರೂಪಿಸುತ್ತಿದೆ ಎಂದು ಮೂಲಗಳು ಹೇಳಿವೆ.