‘ಸದ್ಯ ಯಾರಾದರೂ ಅಪಘಾತ ಮಾಡಿ ಪರಾರಿಯಾದರೆ, ನಕಲಿ ಚಾಲನಾ ಪರವಾನಗಿ ಪತ್ರ ಪಡೆದುಕೊಳ್ಳುತ್ತಾರೆ. ಯಾವುದೇ ಶಿಕ್ಷೆ ಇಲ್ಲದೆ ತಪ್ಪಿಸಿಕೊಳ್ಳಲು ಇದು ಅವರಿಗೆ ನೆರವಾಗುತ್ತದೆ. ಒಂದು ವೇಳೆ ಆಧಾರ್ ಜೋಡಣೆಯಾಗಿದ್ದರೆ, ನೀವು ನಿಮ್ಮ ಹೆಸರನ್ನು ಬದಲಿಸಬಹುದು ಅಷ್ಟೆ ಹೊರತು ನಿಮ್ಮ ಜೈವಿಕ ಮಾಹಿತಿಯನ್ನು ಬದಲಿಸಲು ಸಾಧ್ಯವಿಲ್ಲ. ಅದು ಕಣ್ಣಿನ ಪಾಪೆಯ ಗುರುತು ಆಗಿರಬಹುದು ಇಲ್ಲವೇ ಬೆರಳಚ್ಚು ಆಗಿರಬಹುದು’ ಎಂದು ವಿವರಿಸಿದರು.