ನವದೆಹಲಿ: ಬ್ಯಾಂಕ್ನಲ್ಲಿ ಖಾತೆ ತೆರೆಯಲು ಮತ್ತು ಮೊಬೈಲ್ ಸಿಮ್ ಕಾರ್ಡ್ ಪಡೆಯುವಾಗ ಗುರುತಿನ ಪುರಾವೆಯಾಗಿ ಆಧಾರ್ ಸಂಖ್ಯೆ ನಮೂದಿಸುವುದನ್ನು ಕಡ್ಡಾಯ ಮಾಡುವಂತಿಲ್ಲ ಎಂಬ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಶನಿವಾರ ಅಂಕಿತ ಹಾಕಿದ್ದಾರೆ.
ರಾಜ್ಯಸಭೆಯಲ್ಲಿ ಈ ಸುಗ್ರೀವಾಜ್ಞೆಗೆ ಅನುಮೋದನೆ ಸಿಗದಿದ್ದರಿಂದ ಅವಧಿ ಮುಗಿದ ಕಾರಣ ಕೇಂದ್ರ ಸರ್ಕಾರ ಈಗ ಮತ್ತೊಮ್ಮೆ ಸುಗ್ರೀವಾಜ್ಞೆ ಮೊರೆ ಹೋಗಿದೆ.
ಆಧಾರ್ ಕಾರ್ಡ್ ಬಳಕೆ ಮತ್ತು ಖಾಸಗಿತನ ಕಾಪಾಡಲು ರೂಪಿಸಿರುವ ನಿಯಮಗಳ ಉಲ್ಲಂಘನೆಗೆ ದಂಡ ವಿಧಿಸುವ ತಿದ್ದುಪಡಿ ಇರುವ ಮಸೂದೆಯನ್ನು ಜಾರಿಗೆ ತರಲು ಈ ಸುಗ್ರೀವಾಜ್ಞೆಗೆ ಕಳೆದ ವಾರ ಸಂಪುಟ ಅನುಮೋದನೆ ನೀಡಿದೆ.