'ಕುರುಡು ಕಾಂಚಾಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದೋರ ತುಳಿಯುತ್ತಲಿತ್ತು' ಎಂದು ಈ ನೆಲದ ವರಕವಿ ಬೇಂದ್ರೆ ಅವರ ಪದ್ಯ ಉದ್ಗರಿಸಿದ ಮೋದಿ, ಬೇಂದ್ರೆಯವರು ಈ ಕವನವನ್ನು ಕಾಂಗ್ರೆಸ್ ಆಡಳಿತ ಗಮನಿಸಿಯೇ ಬರೆದಿದ್ದರು ಎನಿಸುತ್ತದೆ. ಕಳೆದ ಐದು ವರ್ಷಗಳನ್ನು ನೆನಪಿಸಿಕೊಳ್ಳಿ. ಕಾಂಗ್ರೆಸ್ನ ಒಬ್ಬರಲ್ಲ ಒಬ್ಬರು ದುಡ್ಡು ಹೊಡೆದವರು ಸಿಕ್ಕಿಕೊಳ್ತಿದ್ದಾರೆ.