ನವದೆಹಲಿ: ಯುದ್ಧದಲ್ಲಿ ಹುತಾತ್ಮರಾದ ಮತ್ತು ಗಾಯಗೊಂಡ ಸೇನಾ ಸಿಬ್ಬಂದಿಯ ಸಂಬಂಧಿಕರಿಗೆ ನೀಡುವ ಪರಿಹಾರ ಮೊತ್ತವನ್ನು ₹ 2 ಲಕ್ಷದಿಂದ ₹ 8 ಲಕ್ಷಕ್ಕೆ ಹೆಚ್ಚಿಸುವ ಮೂಲಕಸೇನೆಯ ಬಹುದಿನಗಳ ಬೇಡಿಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಡೇರಿಸಿದ್ದಾರೆ.
ಪರಿಹಾರ ಮೊತ್ತವನ್ನು ‘ಯುದ್ಧ ಗಾಯಾಳುಗಳ ಸೇನಾ ಕಲ್ಯಾಣ ನಿಧಿ’ (ಎಬಿಸಿಡಬ್ಲ್ಯುಎಫ್) ಮೂಲಕ ನೀಡಲಾಗುವುದು ಎಂದುಸಚಿವಾಲಯದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
‘ಇದುವರೆಗೂ ದೇಹದ ಶೇ 60 ಭಾಗ ಗಾಯಗೊಂಡವರು ಮತ್ತು ಹುತಾತ್ಮರಾದ ಸೇನಾ ಸಿಬ್ಬಂದಿ ಸಂಬಂಧಿಕರಿಗೆ ₹ 2 ಲಕ್ಷ ಪರಿಹಾರ ನೀಡಲಾಗುತ್ತಿತ್ತು. ಇದನ್ನು ನಾಲ್ಕು ಪಟ್ಟು ಹೆಚ್ಚಿಸಲಾಗಿದೆ. ಇದಲ್ಲದೆ ವಿಮಾ ಸೌಲಭ್ಯಗಳು ಸೇರಿವೆ’ ಎಂದು ಹೇಳಿದ್ದಾರೆ.