ಲಖನೌ: ಸೋನ್ಭದ್ರ ಹತ್ಯಾಕಾಂಡದ ಸಂತ್ರಸ್ತರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾನುವಾರ ಭೇಟಿಯಾಗಿದ್ದಾರೆ. ಸಂತ್ರಸ್ತರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ಆದಿತ್ಯನಾಥ ಸೋನ್ಭದ್ರ ಶೂಟೌಟ್ನಲ್ಲಿ ಸಾವಿಗೀಡಾದವರ ಕುಟುಂಬದ ಸದಸ್ಯರಿಗೆ ₹18.5 ಲಕ್ಷ ಮತ್ತು ಗಾಯಗೊಂಡವರಿಗೆ ₹2.5 ಲಕ್ಷ ಪರಿಹಾರ ಧನ ಘೋಷಿಸಿದ್ದಾರೆ.
ಜುಲೈ17ರಂದು ಸೋನ್ಭದ್ರದ ಘೋರವಾಲ್ ಪ್ರದೇಶದಲ್ಲಿ ಜಮೀನೊಂದಕ್ಕೆ ಸಂಬಂಧಿಸಿದಂತೆ ಗ್ರಾಮದ ಮುಖ್ಯಸ್ಥ ಹಾಗೂ ಗೊಂಡ ಬುಡಕಟ್ಟು ಜನರ ಮಧ್ಯೆ ಮಾರಾಮಾರಿ ನಡೆದಿತ್ತು. ಈ ಸಂದರ್ಭದಲ್ಲಿ ಬುಡಕಟ್ಟು ಜನರ ಮೇಲೆ ಗ್ರಾಮದ ಮುಖ್ಯಸ್ಥರ ಕಡೆಯವರು ಗುಂಡಿನ ದಾಳಿ ನಡೆಸಿದ್ದರಿಂದ 10 ಮಂದಿ ಹತರಾಗಿ, 23ಮಂದಿಗಾಯಗೊಂಡಿದ್ದರು. ಈ ಘಟನೆಯು ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಉಂಟುಮಾಡಿತ್ತು. ಗೊಂಡರನ್ನು ಈ ಗ್ರಾಮದಲ್ಲಿ ದಲಿತರೆಂದ ಪರಿಗಣಿಸಲಾಗುತ್ತದೆ.
UP CM on Sonbhadra firing case: Govt has ordered to suspend police personnel responsible. Today I have ordered to provide compensation of Rs. 18.5 lakh to the bereaved families of the deceased&Rs. 2.5 lakh to the injured, from CM Relief Fund under SC/ST provisions. pic.twitter.com/wn1lIUFO7z
— ANI UP (@ANINewsUP) July 21, 2019
Chief Minister of Uttar Pradesh, Yogi Adityanath met and interacted with family members of those who lost their lives in Sonabhadra firing incident, at Umba village in Sonbhadra, today. pic.twitter.com/eSVFg1Jzkv
— ANI UP (@ANINewsUP) July 21, 2019
ಈ ಘಟನೆಗೆ ಕಾರಣವಾದ ಪೊಲೀಸ್ ಸಿಬ್ಬಂದಿಗಳನ್ನು ವಜಾ ಮಾಡುವಂತೆ ಸರ್ಕಾರ ಆದೇಶಿಸಿದೆ.ಸಾವಿಗೀಡಾದ ವ್ಯಕ್ತಿಗಳ ಕುಟುಂಬಕ್ಕೆ ₹18.5 ಲಕ್ಷ ಪರಿಹಾರ ಧನ ಮತ್ತು ಗಾಯಗೊಂಡವರಿಗೆ ₹2.5 ಲಕ್ಷ ಪರಿಹಾರ ಧನವನ್ನು ಸಿಎಂ ಪರಿಹಾರ ನಿಧಿ (ಎಸ್ಸಿ/ಎಸ್ಟಿಗಾಗಿರುವುದು)ಯಿಂದ ನೀಡಲು ಆದೇಶಿಸಿದ್ದೇನೆ ಎಂದು ಆದಿತ್ಯನಾಥ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
उम्भा गाँव के पीड़ितों की आवाज का जब कांग्रेस के हजारों कार्यकर्ताओं, न्यायपसंद लोगों ने साथ दिया तब उप्र सरकार को भी लगा कोई गम्भीर घटना घटी है।
— Priyanka Gandhi Vadra (@priyankagandhi) July 21, 2019
आज जो घोषणाएँ की गयी हैं उनपर जल्द अमल हो। आदिवासियों को जमीन का मालिकाना मिले और सबसे जरूरी कि गाँव के लोगों को पूरी सुरक्षा हो।
ಶುಕ್ರವಾರ ಸೋನ್ಭದ್ರಾ ಸಂತ್ರಸ್ತರನ್ನು ಭೇಟಿ ಮಾಡಲು ಹೋಗಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ತಡೆದು ನಿಲ್ಲಿಸಿದ್ದರು, ಇದೀಗ ಆದಿತ್ಯನಾಥ ಸೋನ್ಭದ್ರ ಭೇಟಿ ನೀಡಿರುವುದರ ಬಗ್ಗೆ ಅಣಕವಾಡಿದ ಪ್ರಿಯಾಂಕಾ, ತಮ್ಮ ಕರ್ತವ್ಯ ಏನೆಂದು ಅರಿತುಕೊಂಡಿರುವುದು ಒಳ್ಳೆಯದೇ.ಸೋನ್ಭದ್ರಕ್ಕೆ ಭೇಟಿ ನೀಡಿದ ಆದಿತ್ಯನಾಥರ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ.ಅದು ವಿಳಂಬವಾಗಿರಬಹುದು. ಆದರೆ ಸಂತ್ರಸ್ತರೊಂದಿಗೆ ನಿಲ್ಲುವುದು ಸರ್ಕಾರದ ಕರ್ತವ್ಯ ಎಂದು ಟ್ವೀಟಿಸಿದ್ದಾರೆ.
उप्र के माननीय मुख्यमंत्री के सोनभद्र जाने का मैं स्वागत करती हूँ। देर से ही सही, पीड़ितों के साथ खड़ा होना सरकार का फर्ज़ है। अपना फर्ज़ पहचानना अच्छा है।
— Priyanka Gandhi Vadra (@priyankagandhi) July 21, 2019
उम्भा को लम्बे समय से न्याय की प्रतीक्षा है। अपेक्षा है उम्भा के पीड़ितों को न्याय मिलेगा और उनकी 5 माँगो को माना जाएगा।
ಇದನ್ನೂ ಓದಿ:
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.