ಆದರೆ ಅಚ್ಚರಿ ಮತ್ತು ವಿಷಾದ ಉಂಟು ಮಾಡಿದ್ದು, ಪಲ್ಲಂಗದ ವಿಷಯ ಎತ್ತಿಕೊಂಡು ಒಬ್ಬ ಹೆಣ್ಣುಮಗಳನ್ನು ಪುರುಷನೊಬ್ಬ ಅವಮಾನಿಸಿದಾಗ, ಹೆಣ್ಣಿನ ಗೌರವವನ್ನು ಎತ್ತಿಹಿಡಿಯಬೇಕಾದ ಸಭ್ಯ ಸಮಾಜದ ಸಾಕ್ಷಿಪ್ರಜ್ಞೆಯ ರೀತಿಯಲ್ಲಿ ವರ್ತಿಸಬೇಕಾದ ಮಾಧ್ಯಮಗಳು, ಅದರಲ್ಲೂ ಮುಖ್ಯವಾಗಿ ಸುದ್ದಿವಾಹಿನಿಗಳು ಜಗ್ಗೇಶ್ ಬಳಸಿದ ಭಾಷೆ ಸರಿ ಎಂಬಂಥ ನಿಲುವನ್ನು ತೆಗೆದುಕೊಂಡು, ಯಾವ ಅಪರಾಧಿ ಭಾವವೂ ಇಲ್ಲದೆ ಸುದ್ದಿ ಪ್ರಸಾರ ಮಾಡಿದ್ದು. ಇದು ನಮ್ಮ ಸಮಾಜ ಚಲಿಸುತ್ತಿರುವ ದಿಕ್ಕನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ನಿಜಕ್ಕೂ ಬೇಸರದ ಸಂಗತಿ.