ಕಳೆದ ಬುಧವಾರ ಚುನಾವಣಾ ಸಮಾವೇಶವೊಂದರಲ್ಲಿ ಶರದ್ ಯಾದವ್ ವಸುಂಧರಾ ರಾಜೇ ವಿರುದ್ಧ ವಿವಾದಾತ್ಮ ಹೇಳಿಕೆ ನೀಡಿದ್ದರು.ಅಲ್ವಾರ್ನಲ್ಲಿ ಮಾತನಾಡುತ್ತ ’ವಸುಂಧರಾ ಅವರಿಗೆ ವಿಶ್ರಾಂತಿ ನೀಡಿ, ಅವರು ತುಂಬಾ ಸುಸ್ತಾಗಿದ್ದಾರೆ. ಈಗ ಅವರು ದಪ್ಪ ಆಗಿದ್ದಾರೆ, ಮೊದಲು ತೆಳ್ಳಗಿದ್ದರು, ನಮ್ಮ ಮಧ್ಯಪ್ರದೇಶದ ಮಗಳು ಎಂದಿದ್ದರು’. ಶರದ್ ಮಾತನಾಡಿದ್ದ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಶರದ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.