ಮೇ 3ರಂದು ಫೋನಿ ಒಡಿಶಾಗೆ ಅಪ್ಪಳಿಸಿತ್ತು. ಬಿರುಗಾಳಿಗೆ ಕೇಂದ್ರಪರ ಜಿಲ್ಲೆಯ ರಾಘುದೈಪುರ್ ಹಳ್ಳಿಯ ದಿನಗೂಲಿ ನೌಕರ ಖಿರೋದ್ ಜೀನ ವಾಸಿಸುತ್ತಿದ್ದ ಮನೆ ಕುಸಿದುಬಿದ್ದಿತ್ತು. ಆದರೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ನಿರ್ಮಾಣಗೊಳಿಸಿದ್ದ ಶೌಚಾಲಯಕ್ಕೆ ಹಾನಿಯಾಗಿರಲಿಲ್ಲ. ಮನೆ ಕಳೆದುಕೊಂಡ ಖಿರೋದ್, ತನ್ನ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಜತೆ 6 ಅಡಿ ಅಗಲದ ಶೌಚಾಲಯದಲ್ಲೇ ಜೀವನ ಸಾಗಿಸುತ್ತಿದ್ದಾರೆ.