ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಎಂಗೆ ಮೋದಿ ಪ್ರಶ್ನಿಸುವ ನೈತಿಕತೆ ಇಲ್ಲ’

Last Updated 6 ಮೇ 2018, 11:57 IST
ಅಕ್ಷರ ಗಾತ್ರ

ಗಂಗಾವತಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಜನಾರ್ಧನ ರೆಡ್ಡಿ ಬಗ್ಗೆ ಮೋದಿ ಅವರನ್ನು ಪ್ರಶ್ನಿಸುವ ಮೂಲಕ ಭಂಡತನ ಪ್ರದರ್ಶಿಸಿದ್ದಾರೆ’ ಎಂದು ಸಂಸದ ಬಿ. ಶ್ರೀರಾಮುಲು ಟೀಕಿಸಿದರು.

ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಶನಿವಾರ ಸಿಬಿಎಸ್ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ರೋಡ್ ಶೋ ನಡೆಸಿ ನಂತರ ಮಾತನಾಡಿದರು.

ಇದಕ್ಕೂ ಮೊದಲು ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ಸಿಗರು ಮೂರು ಬಿಟ್ಟವರು. ಸಿಎಂ ಸಿದ್ದರಾಮಯ್ಯ ಗಾಜಿನ ಮನೆಯಲ್ಲಿ ಕುಳಿತು ಮತ್ತೊಬ್ಬರತ್ತ ಕಲ್ಲು ಎಸೆಯುತ್ತಿದ್ದಾರೆ’ ಎಂದು ಅವರು ಹೇಳಿದರು.

‘ ಜನಾರ್ಧನ ರೆಡ್ಡಿ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ. ಆದರೆ, ಜಾರ್ಜ್ ಅವರಂತ ಆರೋಪಿಯನ್ನು ಪಕ್ಕದಲ್ಲಿಟ್ಟುಕೊಂಡು ಮೋದಿ ಅವರನ್ನು ಪ್ರಶ್ನಿಸುವ ಯಾವ ನೈತಿಕತೆ ಸಿದ್ದರಾಮಯ್ಯ ಅವರಿಗಿದೆ’ ಎಂದು ಪ್ರಶ್ನಿಸಿದರು. ಗಂಗಾವತಿಯಲ್ಲಿ ಮತೀಯ ಪ್ರಚೋದನೆ ಮಾಡುವ ಹಾಗೂ ಐದು ವರ್ಷದಿಂದ ಕ್ಷೇತ್ರದ ಜನರಿಗೆ ಬೇಸರವಾಗಿರುವ ಶಾಸಕ ಇಕ್ಬಾಲ್ ಅನ್ಸಾರಿ ಅವರನ್ನು ದೂರವಿಟ್ಟು, ಶಾಂತಿ ನೆಮ್ಮದಿ ಕಾಪಾಡುವ ಬಿಜೆಪಿಯ ಪರಣ್ಣ ಮುನವಳ್ಳಿಗೆ ಮತ ನೀಡಿ ಎಂದು ರಾಮುಲ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಪ್ರಮುಖ ನಾಯಕರಾದ ವೀರಭದ್ರಪ್ಪ ನಾಯಕ್, ಹನುಮಂತಪ್ಪ ನಾಯಕ್, ಜೆ.ಕೆ. ನಾಯಕ್ ಬಿಜೆಪಿ ಸೇರ್ಪಡೆಯಾದರು. ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಯತ್ನಾಳ್ ಅವರು ಮಾತನಾಡಿದರು.

ರೋಡ್ ಶೋನಲ್ಲಿ ಪರಣ್ಣ ಮುನವಳ್ಳಿ, ಸಿಂಗನಾಳ ವಿರೂಪಾಕ್ಷಪ್ಪ, ಸಿ.ವಿ. ಚಂದ್ರಶೇಖರ, ಎಚ್.ಆರ್. ಚನ್ನಕೇಶವ, ತಿಪ್ಪೇರುದ್ರಸ್ವಾಮಿ, ಸಂತೋಷಿ ಬಾಂಠಿಯಾ, ದೇವಪ್ಪ ಕಾಮದೊಡ್ಡಿ, ಸಾಗರ ಮುನವಳ್ಳಿ, ಶ್ರವಣಕುಮಾರ ರಾಯ್ಕರ್, ಸೈಯದ್ ಅಲಿ, ಸಿದ್ದರಾಮಯ್ಯ, ಯಮುನಪ್ಪ ಅವರು ಭಾಗವಹಿಸಿದ್ದರು.

**
ಸಿದ್ದರಾಮಯ್ಯ ಅವರ ಸೋಲಿನ ಮೂಲಕ ಅವರನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಮನೆಯ ಹಾದಿ ಹಿಡಿಯಲಿದೆ
– ಬಸವನಗೌಡ ಪಾಟೀಲ ಯತ್ನಾಳ್‌, ಕೇಂದ್ರದ ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT