ಕಾಸರಗೋಡು, ಕಣ್ಣೂರು ಹಾಗೂ ಕೋಯಿಕ್ಕೋಡ್ ಜಿಲ್ಲೆಗಳ ರೋಗಿಗಳ ವಿವರ ಗಳನ್ನು ಸೋರಿಕೆ ಮಾಡಲಾಗಿದೆ ಎಂಬುದು ಆರೋಪ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚಿಕಿತ್ಸೆ ನೀಡುವುದಾಗಿ ಹೇಳಿ ಬೆಂಗಳೂರು ಹಾಗೂ ಕೇರಳದ ಕೆಲವು ಆಸ್ಪತ್ರೆಗಳಿಂದ ತಮಗೆ ಕರೆ ಬಂದಿದ್ದಾಗಿ ಈ ಜಿಲ್ಲೆಗಳ ರೋಗಿಗಳು ದೂರಿದ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ.