‘ವಿಬಿಎ ಜತೆ ಮೈತ್ರಿ ಮಾಡಿಕೊಳ್ಳುವ ಮಾತುಕತೆ ನಡೆದಿತ್ತು. ಆದರೆಪ್ರಕಾಶ್ ಅಂಬೇಡ್ಕರ್ ಅವರ ಬೇಡಿಕೆಗೂ, ಅವರ ಸಾಮರ್ಥ್ಯಕ್ಕೂ ತಾಳೆಯಾಗುತ್ತಿರಲಿಲ್ಲ. ನಮಗೆ ಆರು ಕ್ಷೇತ್ರಗಳು ಬೇಕು ಎಂದು ಅವರು ಆರಂಭದಲ್ಲಿ ಕೇಳಿದ್ದರು. ಆಮೇಲೆ ಆ ಬೇಡಿಕೆಯನ್ನು 12ಕ್ಕೆ ಏರಿಸಿದರು. ಅಂತಿಮವಾಗಿ ಅವರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರು. ಅವರಿಗೆ ಮೈತ್ರಿಯಲ್ಲಿ ಆಸಕ್ತಿಯೇ ಇರಲಿಲ್ಲ’ ಎಂದು ಮಹಾರಾಷ್ಟ್ರ ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.