ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕೈ ಕಾಲು, ದೇಹದ ಇತರಭಾಗಗಳು ಸಿಕ್ಕಿದ್ದವು. ಬಾಂಬ್ ದಾಳಿಯ ಹೊಣೆಯನ್ನೂ ಉಗ್ರ ಸಂಘಟನೆಯೊಂದು ಹೊತ್ತುಕೊಂಡಿತ್ತು. ವಾಯುದಾಳಿ ಆಗಿದೆ ಎಂಬುದು ನಿಜ ಆದರೆ ಎಲ್ಲಿ? ಹೇಗೆ ನಡೆಯಿತು? ಅದಕ್ಕೊಂದು ಪುರಾವೆ ಬೇಕಲ್ಲವೇ? ದಾಖಲೆ ಸಿಗದೆ ನಾವು ಅದನ್ನು ನಂಬುವುದಾದರೂ ಹೇಗೆ? ಅಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ ಹೀಗಿರುವಾಗ ಸಾಕ್ಷ್ಯ ಇಲ್ಲದೆ ಅದನ್ನು ನಂಬುವುದು ಹೇಗೆ? ಎಂದು ಪುಲ್ವಾಮ ಹುತಾತ್ಮ ಯೋಧ ರಾಮ್ ವಕೀಲ್ ಅವರ ಸಹೋದರಿ ರಾಮ್ ರಕ್ಷಾ ಪ್ರಶ್ನಿಸಿದ್ದಾರೆ. ಸಾಕ್ಷ್ಯ ತೋರಿಸಿ, ಹಾಗಾದರೆ ಮಾತ್ರ ನನ್ನ ಸಹೋದರನ ಸಾವಿಗೆ ಪ್ರತೀಕಾರವಾಗಿದೆ ಎಂಬ ನೆಮ್ಮದಿ ಸಿಗುತ್ತದೆ ಎಂದಿದ್ದಾರೆ ಈಕೆ.