ಮುಂಬೈ:ಖ್ಯಾತ ನಟ ಅಮಿತಾಭ್ ಬಚ್ಚನ್ ಅವರು ಬಿಹಾರದ 2,100 ರೈತರ ಬ್ಯಾಂಕ್ ಸಾಲವನ್ನು ತೀರಿಸಿದ್ದಾರೆ.
ತಮ್ಮ ಬ್ಲಾಗ್ನಲ್ಲಿ ಈ ವಿಷಯ ತಿಳಿಸಿರುವ ಅವರು, ಆಯ್ದ ರೈತರನ್ನು ಮುಂಬೈಗೆ ಆಹ್ವಾನಿಸಿ ಚೆಕ್ ನೀಡಿದ್ದನ್ನು ಉಲ್ಲೇಖಿಸಿದ್ದಾರೆ.
‘ಭರವಸೆಯನ್ನು ಈಡೇರಿಸಿದ್ದೇನೆ. ಬಿಹಾರದ 2,100 ರೈತರಕೃಷಿ ಸಾಲವನ್ನು ಒಟಿಎಸ್ ಮೂಲಕ ಇತ್ಯರ್ಥಗೊಳಿಸಲಾಗಿದೆ. ಇವರಲ್ಲಿ ಕೆಲವು ರೈತರನ್ನು ಮನೆಗೆ ಆಹ್ವಾನಿಸಿದ್ದು, ಮಕ್ಕಳಾದ ಶ್ವೇತಾ ಮತ್ತು ಅಭಿಷೇಕ್ ರೈತರಿಗೆ ಚೆಕ್ ನೀಡಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದಾಗಿಯೂ ಅವರು ಬ್ಲಾಗ್ನಲ್ಲಿ ತಿಳಿಸಿದ್ದಾರೆ.
ಅಮಿತಾಭ್ ಕಳೆದ ಬಾರಿ ಉತ್ತರ ಪ್ರದೇಶದ 1,398 ಮತ್ತು ಮಹಾರಾಷ್ಟ್ರದ 350 ರೈತರ ಸಾಲ ತೀರಿಸಿದ್ದರು.