‘ನಿಮ್ಮ ಪಾಲಕರಿಗೆ ಬೆದರಿಕೆ ಕರೆಗಳು ಬರಲು ಆರಂಭವಾದಾಗ, ಮಗಳಿಗೆ ಆನ್ಲೈನ್ನಲ್ಲಿ ಬೆದರಿಕೆ ಬಂದಾಗ ಚರ್ಚೆಗೆ ಯಾರೂ ಸಿದ್ಧರಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕೊಲೆಗಡುಕರು ಆಳುತ್ತಾರೆ ಮತ್ತು ಹಿಂಸೆಯೇ ಜೀವನಶೈಲಿಯಾಗುತ್ತದೆ. ಈ ‘ಹೊಸ ಭಾರತ’ದಲ್ಲಿರುವ ಪ್ರತಿಯೊಬ್ಬರಿಗೂ ಅಭಿನಂದನೆಗಳು. ಇದು ನನ್ನ ಕೊನೆಯ ಟ್ವೀಟ್. ಸ್ವತಂತ್ರವಾಗಿ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇಲ್ಲ ಎಂದಮೇಲೆ ನಾನು ಮಾತನಾಡದೇ ಇರಲು ತೀರ್ಮಾನಿಸುವೆ. ನಾನು ಈ ವೇದಿಕೆಯಿಂದ ಹೊರನಡೆಯುತ್ತಿದ್ದೇನೆ’ ಎಂದು ಅನುರಾಗ್ ಕೊನೆಯ ಟ್ವೀಟ್ನಲ್ಲಿ ಹೇಳಿದ್ದಾರೆ.