‘ಕಾರ್ಗಿಲ್ ಯುದ್ಧದ 20 ವರ್ಷಗಳ ನಂತರ’ ವಿಷಯ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಅಥವಾ ಗಡಿಯಲ್ಲಿ ಒಳನುಸುಳುವಿಕೆಯಂಥ ದುಸ್ಸಾಹಸಗಳಿಗೆ ಪಾಕಿಸ್ತಾನ ಸೇನೆ ಆಗಾಗ ಮುಂದಾಗುತ್ತಿದೆ. ದೇಶದ ಗಡಿ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ. ದುಸ್ಸಾಹಸಕ್ಕೆ ಮುಂದಾದರೆ ಹಿಮ್ಮೆಟ್ಟಿಸುವುದು ಖಚಿತ’ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.