ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮಹಿಷಾಸುರ: ನಾಯ್ದು

Last Updated 10 ಮೇ 2019, 17:46 IST
ಅಕ್ಷರ ಗಾತ್ರ

ಅಮರಾವತಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರುಮಹಿಷಾಸುರನಿಗೆ ಹೋಲಿಸಿದ್ದಾರೆ. ‘ಪಶ್ಚಿಮ ಬಂಗಾಳದ ದುರ್ಗೆಯು (ಮಮತಾ ಬ್ಯಾನರ್ಜಿ)ಮಹಿಷಾಸುರನನ್ನು ಸೋಲಿಸಿ ದೇಶಕ್ಕೆ ಶಾಂತಿ ತರಬೇಕು’ ಎಂದು ಕರೆ ಕೊಟ್ಟಿದ್ದಾರೆ.

ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ‘ನಾಯ್ಡು ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಇಂಥ ಹೇಳಿಕೆ ನೀಡುತ್ತಿದ್ದಾರೆ’ ಎಂದು ಹೇಳಿದೆ.

ನಾಯ್ಡು ಹೇಳಿಕೆ ಕುರಿತು ಟ್ವೀಟ್‌ ಮಾಡಿರುವ ತೆಲುಗು ದೇಶಂ, ‘ಮುಖ್ಯಮಂತ್ರಿ ಪ್ರಧಾನಿಯನ್ನು ಈ ಬಾರಿ ಬಂಗಾಳದ ನೆಲದಲ್ಲಿ ಮತ್ತೆ ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮೋದಿಯನ್ನು ಮಹಿಷಾಸುರನಿಗೆ ಹೋಲಿಸಿದ್ದಾರೆ’ ಎಂದಿದೆ. ಶಿಷ್ಟ ರಕ್ಷಣೆಗಾಗಿ ಮಹಿಷಾಸುರನನ್ನು ದುರ್ಗಾದೇವತೆ ಹತ್ಯೆ ಮಾಡಿದ್ದಳು ಎಂಬುದುಪುರಾಣದ ಕತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT