ಮನವೊಲಿಕೆ ಯತ್ನ ವಿಫಲ: ಕಳೆದ ವಾರ ಚೆಲಮೇಶ್ವರ್ ಅವರನ್ನು ಭೇಟಿಯಾಗಿದ್ದ ಸಂಘದ ಪದಾಧಿಕಾರಿಗಳು ಮೇ 18ಕ್ಕೆ ನಿಗದಿಯಾಗಿದ್ದ ಬೀಳ್ಕೊಡುಗೆ ಸಮಾರಂಭಕ್ಕೆ ಆಹ್ವಾನ ನೀಡಿದ್ದರು. ಆದರೆ, ಅವರು ಆಹ್ವಾನ ಒಪ್ಪಿಕೊಂಡಿರಲಿಲ್ಲ. ಕೋರ್ಟ್ ರಜಾ ಅವಧಿಯಲ್ಲಿ ನಿವೃತ್ತರಾಗುವ ನ್ಯಾಯಮೂರ್ತಿಗಳಿಗೆ ರಜೆ ಆರಂಭವಾಗುವ ಮೊದಲೇ ಬೀಳ್ಕೊಡುಗೆ ನೀಡುವುದು ವಾಡಿಕೆ.