ಬಿಜೆಪಿ ಹಿರಿಯ ನಾಯಕರಾದ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಮಹಂತ್ ನೃತ್ಯ ಗೋಪಾಲ್ ದಾಸ್, ಆಚಾರ್ಯ ಧರ್ಮೇಂದ್ರ ದೇವ್, ಆರ್.ಎನ್.ಶ್ರೀವಾತ್ಸವ, ಜೈ ಭಗವಾನ್ ಗೋಯಲ್, ಅಮರ್ ನಾಥ್ ಗೋಯಲ್ ಮತ್ತು ಸುಧೀರ್ ಕಕ್ಕಡ್ ಅವರ ಹೆಸರು ಈ ಪಟ್ಟಿಯಲ್ಲಿದೆ. ಇವರಿಗೆ ಕೇಳಲು 1,000 ಪ್ರಶ್ನೆಗಳನ್ನು ನ್ಯಾಯಾಲಯವು ಸಿದ್ಧಪಡಿಸಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಆಗಸ್ಟ್ 31ರೊಳಗೆ ವಿಚಾರಣೆ ಪೂರ್ಣಗೊಳಿಸಿ,ತೀರ್ಪು ನೀಡಲು ನ್ಯಾಯಾಲಯವು ಪ್ರತಿ ದಿನವೂ ವಿಚಾರಣೆ ನಡೆಸುತ್ತಿದೆ.