ಹರ್ಯಾಣದ ಅಂಬಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಮಾರಿ ಸೆಲ್ಜಾ ಪರ ಚುನಾವಣಾ ಪ್ರಚಾರ ಮಾಡಿದ ಪ್ರಿಯಾಂಕಾ, ಪ್ರಸಿದ್ಧ ಕವಿ ರಾಮ್ಧಾರಿ ಸಿಂಗ್ ದಿನಕರ್ ಅವರ ಕವಿತೆಯ ಸಾಲನ್ನು ಉಲ್ಲೇಖಿಸಿದ್ದಾರೆ.ವಿನಾಶ ಹತ್ತಿರ ಬರುತ್ತಿದ್ದಂತೆ ಮನುಷ್ಯ ವಿವೇಕ ಕಳೆದುಕೊಳ್ಳುತ್ತಾನೆ(ಜಬ್ ನಾಶ್ ಮನುಜ್ ಪರ್ ಚಾತಾ ಹೈ, ಪೆಹಲೇ ವಿವೇಕ್ ಮರ್ ಜಾತಾ ಹೈ) ಎಂಬ ಸಾಲನ್ನು ಹೇಳಿದ ಪ್ರಿಯಾಂಕಾ, ಚುನಾವಣೆಯ ವೇಳೆ ನೀಡಿದ ಭರವಸೆಗಳನ್ನು ಬಿಜೆಪಿ ಪೂರೈಸಿಲ್ಲ, ಅದರ ಬದಲಾಗಿ ಅವರು ಹುತಾತ್ಮರ ಹೆಸರಿನಲ್ಲಿ ಅಥವಾ ನನ್ನ ಕುಟುಂಬದ ಹುತಾತ್ಮರನ್ನು ಹಂಗಿಸಿ ಮತ ಕೇಳುತ್ತಿದ್ದಾರೆ ಎಂದಿದ್ದಾರೆ.