ನವದೆಹಲಿ:ಬಾಲಾಕೋಟ್ನಲ್ಲಿ ಭಾರತೀಯ ಸೇನೆ ನಡೆಸಿದ ವೈಮಾನಿಕ ದಾಳಿಯ ಸೂತ್ರಧಾರರಲ್ಲೊಬ್ಬರಾದ ಸಮಂತ್ ಗೋಯಲ್ ಅವರನ್ನು ರಿಸರ್ಚ್ ಅನಾಲಿಸಿಸ್ ವಿಂಗ್ನ (ರಾ) ಮುಖ್ಯಸ್ಥರಾಗಿ ಸರ್ಕಾರ ನೇಮಕ ಮಾಡಿದೆ. ಜತೆಗೆ, ಗುಪ್ತಚರ ದಳದ (ಐಬಿ) ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ಅರವಿಂದ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಅರವಿಂದ ಕುಮಾರ್ ಅವರು ಸದ್ಯ ಗುಪ್ತಚರ ದಳದ ಕಾಶ್ಮೀರ ವಿಭಾಗದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.