ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೋಚ್ಛ ನ್ಯಾಯಾಲಯ ಸುಪ್ರೀಂ, ಆದರೆ ದೋಷಾತೀತವಲ್ಲ –ಒವೈಸಿ

Last Updated 9 ನವೆಂಬರ್ 2019, 19:20 IST
ಅಕ್ಷರ ಗಾತ್ರ

ಹೈದರಾಬಾದ್‌: ‘ಸರ್ವೋಚ್ಛ ನ್ಯಾಯಾಲಯ ನಿಜವಾಗಿಯೂ ಸುಪ್ರೀಂ. ಆದರೆ, ದೋಷಾತೀತವಲ್ಲ’ ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾಸುದ್ದೀನ್‌ ಒವೈಸಿ ಹೇಳಿದ್ದಾರೆ.

‘ಅಯೋಧ್ಯೆ ನಿವೇಶನ ವಿವಾದ ಕುರಿತ ಸುಪ್ರೀಂ ಕೋರ್ಟ್‌ ತೀರ್ಪು ಕುರಿತು ಪ್ರತಿಕ್ರಿಯಿಸಿದ ಅವರು, ‘ಮುಸಲ್ಮಾನರಿಗೆ ಐದು ಎಕರೆ ಭೂಮಿ ಅಗತ್ಯವಿಲ್ಲ. ನಾವು ಖಂಡಿತವಾಗಿ ಆ ‘ಕೊಡುಗೆ’ಯನ್ನು ತಿರಸ್ಕರಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ಉತ್ತರ ಪ್ರದೇಶದಲ್ಲಿ ‘ದೇವರಿ’ಗಾಗಿ ಐದು ಎಕರೆ ಭೂಮಿಯನ್ನು ಖರೀದಿಸಲು ಆಗದಷ್ಟೂ ಶೋಚನೀಯ ಸ್ಥಿತಿಯಲ್ಲಿಲ್ಲ. ದಯವಿಟ್ಟು ನಮ್ಮನ್ನು ಹುರಿದುಂಬಿಸಬೇಡಿ’ ಎಂದರು.

‘ನನಗೆ ಭಾರತ ಸಂವಿಧಾನದ ಮೇಲೆ ನಂಬಿಕೆ ಇದೆ. ಮುಸಲ್ಮಾನರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುತ್ತೇವೆ. ತೀರ್ಪು ಕುರಿತಂತೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿಲುವನ್ನು ಒಪ್ಪಲಿದ್ದು, ತೀರ್ಪು ನಮಗೆ ಸಮಾಧಾನ ನೀಡಿಲ್ಲ’ ಎಂದು ಹೇಳಿದರು.

‘ಬಾಬರಿ ಮಸೀದಿಯನ್ನು ನೆಲಸಮ ಮಾಡಿದವರಿಗೆ ಈಗ ಟ್ರಸ್ಟ್‌ ಸ್ಥಾಪಿಸಲು ಹಾಗೂ ರಾಮಮಂದಿರ ನಿರ್ಮಾಣ ಕಾರ್ಯ ಆರಂಭಿಸುವ ಹೊಣೆಯನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಇದೊಂದು ವಿರೋಧಾಭಾಸ’ ಎಂದು ಹೇಳಿದರು.

ಒಂದು ವೇಳೆ ಅಲ್ಲಿ ಮಸೀದಿಯನ್ನು ನೆಲಸಮ ಮಾಡಿರದೇ ಇದ್ದರೆ ಸುಪ್ರೀಂ ಕೋರ್ಟ್‌ನ ತೀರ್ಪು ಏನಿರುತ್ತಿತ್ತು? ಎಂದು ಪ್ರಶ್ನಿಸಿದ ಅವರು, ಮಸೀದಿ ನೆಲಸಮ ಕಾನೂನುಬಾಹಿರ ಎಂಬುದನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT