‘ವಿಮಾನ ಕಂಪನಿ ಲೋಪ ಎಸಗಿದೆ. ಶಂಕರನಾರಾಯಣನ್ ಮಾನಸಿಕ ಕಿರುಕುಳ, ಒತ್ತಡ ಎದುರಿಸಿದ್ದಾರೆ ಎಂಬುದು ವೇದ್ಯವಾಗುತ್ತದೆ. ಅವರು ಕಳೆದುಕೊಂಡಿರುವ ವಸ್ತುಗಳ ಮೌಲ್ಯ ಭರಿಸಿಕೊಡಬೇಕು’ ಎಂದು ಆದೇಶಿಸಲಾಗಿದೆ. ‘ಹೊಸ ಬಟ್ಟೆ, ಶೂ ಖರೀದಿಗೆ ವ್ಯಯಿಸಿದ ₹ 16,415 ಮತ್ತು ವ್ಯಾಜ್ಯದ ಖರ್ಚು ರೂಪದಲ್ಲಿ ₹ 10 ಸಾವಿರವನ್ನು ದೂರುದಾರರಿಗೆ ಮೂವತ್ತು ದಿನದಲ್ಲಿ ನೀಡಬೇಕು’ ಎಂದು ವಿವರಿಸಲಾಗಿದೆ.