ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಚಲ: ಮತ್ತೆ ಹಿಮಪಾತ

Last Updated 21 ಫೆಬ್ರುವರಿ 2019, 19:24 IST
ಅಕ್ಷರ ಗಾತ್ರ

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರಿ ಜಿಲ್ಲೆಯ ಶಿಪ್ಕಿ ಲಾ ಬಳಿ ಗುರುವಾರ ಬೆಳಗ್ಗೆ ಪುನಃ ಹಿಮಪಾತ ಸಂಭವಿಸಿದ್ದು, ಇದರಿಂದ ಬುಧವಾರ ಹಿಮಪಾತದಲ್ಲಿ ಸಿಲುಕಿದ್ದ ಯೋಧರ ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ಅಡ್ಡಿ ಉಂಟಾಗಿದೆ.

ಬುಧವಾರ ಉಂಟಾದ ಹಿಮಪಾತ ದಲ್ಲಿ ಸೇನೆಯ ಆರು ಯೋಧರು ಸಿಲುಕಿಕೊಂಡಿದ್ದರು. ಇವರಲ್ಲಿ ಒಬ್ಬ ಯೋಧನ ಮೃತದೇಹ ದೊರಕಿದ್ದು, ಉಳಿದವರು ಪತ್ತೆಯಾಗಿಲ್ಲ. ಇವರು ಸಹ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಜಮ್ಮು–ಕಾಶ್ಮೀರ ಹೆದ್ದಾರಿ ಬಂದ್:ಜಮ್ಮು–ಶ್ರೀನಗರದಲ್ಲಿ ಭಾರಿ ಮಳೆ ಯಿಂದಾಗಿ ಗುರುವಾರ ಐದು ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಎರಡನೇ ದಿನವಾದ ಗುರುವಾರವೂ ಹೆದ್ದಾರಿ ಮುಚ್ಚಲಾಗಿದ್ದು, ಜಮ್ಮುವಿನಿಂದ ಕಾಶ್ಮೀರ ಕಡೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ರಾಮಬನ, ಉಧಂಪುರ ಹಾಗೂ ಜಮ್ಮುವಿನ ವಿವಿಧೆಡೆ 600ಕ್ಕೂ ಹೆಚ್ಚು ವಾಹನಗಳ ಸಂಚಾರಕ್ಕೆ ತಡೆ ಉಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT