ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆ ಘಟ್ಟದಲ್ಲಿ ಅಯೋಧ್ಯೆ ವಿಚಾರಣೆ

ಅ.17ರಂದು ಸುಪ್ರೀಂಕೋರ್ಟ್‌ನಲ್ಲಿ ಕೊನೆಯ ಕಲಾಪ; ನ.17ರಂದು ತೀರ್ಪು
Last Updated 13 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಸುದೀರ್ಘ ಅವಧಿಯಿಂದ ಬಾಕಿಯಿರುವ ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದ ವಿಚಾರಣೆ ಅಂತಿಮ ಘಟ್ಟ ತಲುಪಿದ್ದು, ಸೋಮವಾರದಿಂದ ಕೊನೆಯ ಹಂತದ ವಿಚಾರಣೆ ಆರಂಭವಾಗಲಿದೆ. ನವೆಂಬರ್ 17ರಂದು ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಿಸಲಿದೆ.

ಒಂದು ವಾರದ ದಸರಾ ರಜೆಯ ಬಳಿಕ ಪ್ರಕರಣದ38ನೇ ದಿನದ ಕಲಾಪ ನಡೆಯಲಿದೆ. ಪ್ರಕ್ರಿಯೆ ಪೂರ್ಣಗೊಳಿಸಲು ಅಕ್ಟೋಬರ್ 17ರ ಗಡುವು ನಿಗದಿಪಡಿಸಲಾಗಿದೆ.

ಮುಸ್ಲಿಂ ಅರ್ಜಿದಾರರು ಸೋಮವಾರ ವಾದಮಂಡಿಸಬೇಕಿದೆ. ಮುಂದಿನ ಎರಡು ದಿನಗಳನ್ನು ಹಿಂದೂ ಅರ್ಜಿದಾರರಿಗೆ ಮೀಸಲಿರಿಸಲಾಗಿದೆ. ಅ. 17ರಂದು ವಿಚಾರಣೆ ಅಂತಿಮಗೊಳ್ಳಲಿದ್ದು, ಅಂದು ಎರಡೂ ಕಡೆಯವರು ತಮ್ಮ ಕೊನೆಯ ವಾದವನ್ನು ಪೂರ್ಣಗೊಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT