ಅಯೋಧ್ಯೆ: ಮೊದಲು ಮಂದಿರ, ಆಮೇಲೆ ಸರ್ಕಾರ (ಪೆಹಲೇ ಮಂದಿರ್, ಫಿರ್ ಸರ್ಕಾರ್) ಎಂಬ ಘೋಷಣೆಯೊಂದಿಗೆ ವಿಶ್ವ ಹಿಂದೂ ಪರಿಷತ್ ಮತ್ತು ರಾಮ ಮಂದಿರ ನಿರ್ಮಾಣದ ದಿನಾಂಕ ಹೇಳಿ ಎಂಬ ಒತ್ತಾಯದೊಂದಿದೆ ಶಿವಸೇನೆ ಇಂದು ಅಯೋಧ್ಯೆಯಲ್ಲಿ ಶಕ್ತಿ ಪ್ರದರ್ಶನ ನಡೆಸಲಿದೆ.
2 ಲಕ್ಷದಷ್ಟು ಕಾರ್ಯಕರ್ತರು ಭಾಗವಹಿಸುವ ಈ ರ್ಯಾಲಿಯ ಜತೆಗೆ ವಿಶ್ವ ಹಿಂದೂ ಪರಿಷತ್ ಧರ್ಮ ಸಭೆಯನ್ನು ಆಯೋಜಿಸಿದೆ.
Visuals from Ayodhya. VHP and Shiv Sena are organising separate events in the city today over the matter of #RamTemple. pic.twitter.com/kKKFBhaTR0
ಅಯೋಧ್ಯೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಕೇಂದ್ರ ಸರ್ಕಾರ ಮುಖ್ಯಮಂತ್ರಿ ಯೋಗಿಆದಿತ್ಯನಾಥ ಅವರಿಗೆ ನಿರ್ದೇಶಿಸಿದೆ.
ಎರಡು ಪ್ರತ್ಯೇಕ ರೈಲುಗಳಲ್ಲಿ ಶಿವಸೇನಾ ಕಾರ್ಯಕರ್ತರು ಅಯೋಧ್ಯೆಗೆ ತಲುಪಲಿದ್ದು, ಇದಕ್ಕೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ನೇತೃತ್ವ ನೀಡಲಿದ್ದಾರೆ.ವಿಎಚ್ಪಿ ಮತ್ತು ಶಿವಸೇನೆ ಪ್ರತ್ಯೇಕವಾಗಿ ರ್ಯಾಲಿ ನಡೆಸಲಿದೆ.ವಿಎಚ್ಪಿ ಇಂದು ನಾಗಪುರ್ ಮತ್ತು ಬೆಂಗಳೂರಿನಲ್ಲಿಯೂ ರ್ಯಾಲಿ ನಡೆಸಲಿದೆ.ಡಿಸೆಂಬರ್ 9 ರಂದು ದೆಹಲಿಯಲ್ಲಿ ರ್ಯಾಲಿ ನಡೆಯಲಿದೆ.