ವಿಚಾರಣೆ ಸಂದರ್ಭ, ‘ಚಬೂತರಾ’ವನ್ನು ಜನ್ಮಸ್ಥಾನವೆಂದು ನೀವು ವಿವಾದ ಸೃಷ್ಟಿಸಬಾರದು ಎಂದು ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಹೇಳಿದರು. ಇದಕ್ಕುತ್ತರಿಸಿದ ಜಿಲಾನಿ, ‘ಹಿಂದೆ ನಾವು ಹಾಗೆ ಮಾಡಿದ್ದೆವು. ಆದರೆ, ಆ ಜಾಗವನ್ನು ಜನ್ಮಸ್ಥಾನವೆಂದು ನಂಬಿ ಅಲ್ಲಿ ಪೂಜಿಸಲಾಗುತ್ತಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದ್ದರು’ ಎಂದು ಹೇಳಿದರು.