‘ಶ್ರೀರಾಮನ ದೊಡ್ಡ ಭಕ್ತೆಯಾಗಿರುವ ಅಮ್ಮ ಅಯೋಧ್ಯೆ ಜಮೀನು ವಿವಾದ ಪರಿಹಾರಕ್ಕಾಗಿ ಎರಡು ದಶಕಗಳಿಂದ ಕಾಯುತ್ತಿದ್ದರು. ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ಸಂಸ್ಕೃತ ಭಾಷಾ ಶಿಕ್ಷಕಿಯಾಗಿರುವ ಅಮ್ಮ, 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸಗೊಂಡು ದೇಶದಾದ್ಯಂತ ಹಿಂಸಾಚಾರ ನಡೆದಾಗ ತುಂಬಾ ಖಿನ್ನಗೊಂಡಿದ್ದರು. ಅಂದಿನಿಂದಲೇ ಅವರು ಉಪವಾಸ ತೀರ್ಮಾನ ಕೈಗೊಂಡರು. ತಮ್ಮ ಆಹಾರವನ್ನು ಬರೀ ಹಣ್ಣು ಮತ್ತು ಹಾಲಿಗೆ ಸೀಮಿತಗೊಳಿಸಿಕೊಂಡರು. ಸಂಬಂಧಿಕರು ಹಲವು ಬಾರಿ ಮನವಿ ಮಾಡಿದರೂ ಅವರು ತಮ್ಮ ತೀರ್ಮಾನ ಕೈಬಿಡಲಿಲ್ಲ’ ಎಂದು ಅಮಿತ್ ಮಾಹಿತಿ ನೀಡಿದರು.