ಕರ ಸೇವಕರು 1992ರ ಡಿಸೆಂಬರ್ 6ರಂದು ಮಸೀದಿ ಧ್ವಂಸ ಮಾಡಿದ 0.313 ಎಕರೆ ನಿವೇಶನ, ಈ 2.77 ಎಕರೆ ಪ್ರದೇಶದಲ್ಲಿಯೇ ಇದೆ ಎಂದು ಕೇಂದ್ರಸರ್ಕಾರ ಅರ್ಜಿಯಲ್ಲಿ ತಿಳಿಸಿತ್ತು. 1993ರಲ್ಲಿಯೇ, ಕೇಂದ್ರ ಸರ್ಕಾರವು ಈ 2.77 ಎಕರೆ ವಿವಾದಿತ ಭೂಮಿಯ ಜೊತೆಗೆ 67.703 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ. ಈ ಪ್ರದೇಶದಲ್ಲಿ 42 ಎಕರೆ ಭೂಮಿ ರಾಮ್ಜನ್ಮಭೂಮಿ ನ್ಯಾಸ್ಗೆ ಸೇರಿದೆ. ಹೀಗಾಗಿ, ಹೆಚ್ಚುವರಿ ಭೂಮಿಯನ್ನು ಮೂಲ ಮಾಲೀಕರಿಗೆ ಸಲ್ಲಿಸುವಂತೆ ರಾಮ್ ಜನ್ಮಭೂಮಿ ನ್ಯಾಸ್ ಅರ್ಜಿ ಸಲ್ಲಿಸಿತ್ತು. ಮೂಲ ಮಾಲೀಕರಿಗೆ ಭೂಮಿ ಹಿಂದಿರುಗಿಸಲು ನಮ್ಮಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ತಿಳಿಸಿದೆ.