‘ರೈತರ ಮುಖಂಡರ ಸಭೆಯಲ್ಲಿಯೂ ನಮ್ಮ ವಾದಗಳನ್ನು ಮಂಡಿಸಲು ಬಿಡದೇ, ಸಾಲ ಮನ್ನಾಕ್ಕೆ ಇನ್ನೂ 15 ದಿನಗಳು ಬೇಕು ಎಂದು ಹೇಳುತ್ತಿರುವ ಮುಖ್ಯಮಂತ್ರಿಯವರ ಮಾತಿನ ಮೇಲೆ ಸಂಶಯ ಮೂಡುತ್ತಿದೆ’ ಎಂದರು. ಇಲ್ಲಿನ ರೈತರ ಬೆಳೆ ಸಾಲ, ಮಾಧ್ಯಮಿಕ ಹಾಗೂ ಆಸಾಮಿ ಸಾಲವನ್ನೂ ಸಂಪೂರ್ಣವಾಗಿ ಮನ್ನಾ ಮಾಡಬೇಕು. ಕರಾವಳಿಯಲ್ಲಿ ಮೀನುಗಾರಿಕೆ ವೃತ್ತಿ ನಂಬಿ ಜೀವನ ಸಾಗಿಸುವ ಸಾಕಷ್ಟು ಮಂದಿ ಇದ್ದಾರೆ. ಹೀಗಾಗಿ ಮೀನುಗಾರರನ್ನು, ಕಲ್ಲಂಗಡಿ ಬೆಳೆಗಾರರ ಸಾಲವನ್ನೂ ಕೃಷಿ ಸಾಲವೆಂದು ಪರಿಗಣಿಸಿ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.