ನವದೆಹಲಿ: ಇತರ ಹಿಂದುಳಿದ ವರ್ಗಗಳ ಉಪವರ್ಗೀಕರಣಗೊಳಿಸುವ ಆಯೋಗದ ಅವಧಿಯನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ.
ದೆಹಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಿ.ರೋಹಿಣಿ ಅವರ ನೇತೃತ್ವದಲ್ಲಿ ಈ ಆಯೋಗವನ್ನು 2017ರ ಅಕ್ಟೋಬರ್ 2ರಂದು ರಚಿಸಲಾಗಿತ್ತು.
’ಜುಲೈ 31ರವರೆಗೆ ಆಯೋಗದ ಅವಧಿಯನ್ನು ವಿಸ್ತರಿಸಲಾಗಿದೆ. ಮೇ 31ಕ್ಕೆ ಆಯೋಗದ ಅವಧಿ ಮುಕ್ತಾಯವಾಗಬೇಕಾಗಿತ್ತು. ಇದೀಗ ಆರನೇ ಬಾರಿ ಅವಧಿ ವಿಸ್ತರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಪಟ್ಟಿಯಲ್ಲಿರುವ ಹಿಂದುಳಿದ ವರ್ಗಗಳನ್ನು ಉಪವರ್ಗೀಕರಣಗೊಳಿಸುವ ಕಾರ್ಯವನ್ನು ಆಯೋಗವು ಕೈಗೊಂಡಿದೆ.ವರ್ಗೀಕರಣಗೊಳಿಸುವುದರಿಂದ ಮೀಸಲಾತಿಯಲ್ಲೇ ಒಳಮೀಸಲಾತಿ ಕಲ್ಪಿಸುವ ಪ್ರಸ್ತಾವನೆ ಮಂಡಿಸಬಹುದು. ಇದು ರಾಷ್ಟ್ರ ರಾಜಕೀಯದ ಮೇಲೆ ವ್ಯಾಪಕ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗಿದೆ.