ಗೋಪೇಶ್ವರ: ಚಳಿಗಾಲದ ವಿರಾಮದ ನಂತರ ಹಿಮಾಲಯ ಶ್ರೇಣಿಯ ಪ್ರಮುಖ ದೇವಾಲಯ ಬದರಿನಾಥದ ಬಾಗಿಲನ್ನು ಶುಕ್ರವಾರ ತೆರೆಯಲಾಗಿದ್ದು, ದರ್ಶನಕ್ಕೆ ಮುಕ್ತವಾಗಿದೆ.
ವೇದ ಮಂತ್ರಗಳ ಉದ್ಘೋಷದೊಂದಿಗೆ ಮುಂಜಾನೆ 4.15ಕ್ಕೆ ದೇಗುಲದ ಮುಖ್ಯ ಅರ್ಚಕ ಈಶ್ವರಿ ಪ್ರಸಾದ್ ನಂಬೂದರಿ ಅವರು ಬಾಗಿಲನ್ನು ತೆರೆದರು. ಸಾವಿರಾರು ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದರು.
ಹಿಮಾಲಯದಲ್ಲಿನ ಅತ್ಯಂತ ಎತ್ತರದ ಗುಡಿ ಬದರಿನಾಥದ ದರ್ಶನಕ್ಕೆ 10 ಸಾವಿರಕ್ಕೂ ಅಧಿಕ ಭಕ್ತರು ಬಂದಿದ್ದರು. ಉತ್ತರಾಖಂಡದ ರಾಜ್ಯಪಾಲ ಬೇಬಿ ರಾಣಿ ಮೌರ್ಯ ಹಾಗೂ ಮಾಜಿ ಮುಖ್ಯಮಂತ್ರಿ ರಮೇಶ್ ಪೊಖ್ರಿಯಲ್ ನಿಶಾಂಕ್ ಉಪಸ್ಥಿತರಿದ್ದರುಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.