45 ನಿಮಿಷಗಳ ಹಿಂದೆಯಷ್ಟೇ ದರ್ವೇಶ್ ಅವರ ಹತ್ಯೆ ನಡೆದಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ನ್ಯಾಯಾಲಯದಲ್ಲಿ ಆಕೆಗೆ ಸ್ವಾಗತ ಕೋರುವ ಕಾರ್ಯಕ್ರಮ ನಡೆಯುತ್ತಿದ್ದಾಗ ನ್ಯಾಯವಾದಿ ಮನೀಶ್ ಗುಂಡು ಹಾರಿಸಿದ್ದಾರೆ.ಆಕೆಯ ದೇಹಕ್ಕೆ ಮೂರು ಗುಂಡು ತಾಗಿದೆ.ಆಕೆಯನ್ನು ತಕ್ಷಣವೇ ಪುಷ್ಪಾಂಜಲಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ನಿರ್ದೇಶಕ ಅಜಯ್ ಆನಂದ್ ಹೇಳಿದ್ದಾರೆ.