ಸಚಿವ ಡಾ.ಗೋವಿಂದಸಿಂಗ್ ಅವರು ಭಾಷಣ ಮಾಡುತ್ತಿದ್ದ ಸಮಯದಲ್ಲಿ ಹೆಜ್ಜೇನು ಭಾರಿ ಪ್ರಮಾಣದಲ್ಲಿ ಬಂದು ವಿದ್ಯಾರ್ಥಿಗಳ ಮೇಲೆರಗಿದವು. ಈ ಸಮಯದಲ್ಲಿ ಕಿರುಚಾಡಿ, ಕೂಗಾಡುತ್ತಾ ವಿದ್ಯಾರ್ಥಿಗಳೆಲ್ಲಾ ದಿಕ್ಕಾಪಾಲಾಗಿ ಓಡಲಾರಂಭಿಸಿದರು. ಸುಮಾರು 20ರಿಂದ 24 ಮಂದಿ ವಿದ್ಯಾರ್ಥಿಗಳಿಗೆ ತೀವ್ರಗಾಯಗಳಾಗಿವೆ ಎಂದು ಸುದ್ದಿ ಸಂಸ್ಥೆಗಳ ವರದಿ ತಿಳಿಸಿದೆ.