ಶಿಕ್ಷೆ ಪ್ರಕಟಗೊಂಡ ನಂತರ ಲಾಲು ಅವರನ್ನು ರಾಂಚಿಯ ಹೋಟವಾರ್ ಜೈಲಿಗೆ ಕಳುಹಿಸಲಾಗಿತ್ತು. ಸಕ್ಕರೆ ಕಾಯಿಲೆ, ಕಿಡ್ನಿ ಸಮಸ್ಯೆ ಕಂಡುಬಂದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯಿತು. 2018ರಲ್ಲಿ ಮುಂಬೈ ಮತ್ತು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಚಿಕಿತ್ಸೆ ಪಡೆಯಲು ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಲಾಲು ಆರೋಗ್ಯವಾಗಿದ್ದಾರೆ ಎಂದು ಏಮ್ಸ್ ಪ್ರಮಾಣಪತ್ರ ನೀಡಿದ ನಂತರ ಮತ್ತೆ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಕಳೆದ ವರ್ಷ ಅವರ ಪುತ್ರ ತೇಜ್ ಪ್ರತಾಪ್ ಮದುವೆಗೆ ಜಾಮೀನು ನೀಡಲಾಗಿತ್ತು. 2018ರ ಆಗಸ್ಟ್ನಲ್ಲಿ ಮತ್ತೆ ಅವರನ್ನು ಆರ್ಐಎಂಎಸ್ಗೆ ಸ್ಥಳಾಂತರಿಸಲಾಯಿತು.